ಕೆ.ಆರ್.ಪೇಟೆ ಮೆಗಾ ಫುಡ್ ಫ್ಯಾಕ್ಟರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಕೆ.ಆರ್.ಪೇಟೆ ಮೆಗಾ ಫುಡ್ ಫ್ಯಾಕ್ಟರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಕೆ.ಆರ್.ಪೇಟೆ ತಾಲೋಕಿನ ಬಣ್ಣೇನಹಳ್ಳಿ ಬಳಿಯಲ್ಲಿರುವ ಮೆಗಾ ಫುಡ್ ಫ್ಯಾಕ್ಟರಿಯಲ್ಲಿ ಇತ್ತೀಚೆಗೆ ಫ್ಯಾಕ್ಟರಿಯ ಮ್ಯಾನೇಜರ್ ಹಾಗೂ ವ್ಯವಸ್ಥಾಪಕರು ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಮೀನಾ-ಮೇಷ ಮಾಡಿದ ಹಿನ್ನೆಲೆಯಲ್ಲಿ ಕರುನಾಡು ಯುವಜನ ವೇದಿಕೆಯು ಫ್ಯಾಕ್ಟರಿಯಲ್ಲಿ ಹೋರಾಟ ಮಾಡಿ ಗ್ರಾಮಾಂತರ ಪೊಲೀಸರಾದ ಜಗದೀಶ್ ರವರ ಸಮೂಹದಲ್ಲಿ ಇದೇ 15ರಂದು ಆಚರಣೆ ಮಾಡಲು ಒಪ್ಪಿಗೆ ಸೂಚಿಸಿದ್ದು ಫ್ಯಾಕ್ಟರಿಯ ಕಾರ್ಮಿಕರು ಜ್ಯೋತಿ ಬೆಳಗಿಸುವ ಮೂಲಕ ಧ್ವಜಾರೋಹಣ ನೆರವೇರಿಸಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಅದ್ಧೂರಿಯಾಗಿ ನೆರವೇರಿಸಿದರು,

ಈ ಸಂದರ್ಭದಲ್ಲಿ

ಕರುನಾಡು ಯುವಜನ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಲೋಕೇಶ್.ವಿ, ಜಿಲ್ಲಾಧ್ಯಕ್ಷರಾದ ಎಸ್.ರವಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ,ತಾಲ್ಲೂಕು ಅಧ್ಯಕ್ಷರಾದ ಯುವರಾಜ್, ಉಪಾಧ್ಯಕ್ಷರಾದ ದಿನೇಶ್, ಸುನೀಲ್ ಕುಮಾರ್,

ಮೆಗಾ ಫುಡ್ ಫ್ಯಾಕ್ಟರಿಯ ಮ್ಯಾನೇಜರ್ ಮಲ್ಲಿಕಾರ್ಜುನ್, ಹಾಗೂ ಫುಡ್ ಫ್ಯಾಕ್ಟರಿಯ ಕಾರ್ಮಿಕರು ಸೇರಿದಂತೆ ಹಲವಾರು ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು

What's Your Reaction?

like

dislike

love

funny

angry

sad

wow