*ಚರಂಡಿ ಸ್ವಚ್ಛತೆಗೆ ಗ್ರಾಮಸ್ಥರ ಅಗ್ರಹ : ಗ್ರಾಮ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರ ಬೇಸರ.*

*ಚರಂಡಿ ಸ್ವಚ್ಛತೆಗೆ ಗ್ರಾಮಸ್ಥರ ಅಗ್ರಹ : ಗ್ರಾಮ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರ ಬೇಸರ.*

ಕೆ ಆರ್ ಪೇಟೆ ತಾಲ್ಲೂಕು ಬೂಕನಕೆರೆ ಹೋಬಳಿ ಅಟ್ಟುಪ್ಪೆ ಗ್ರಾಮದಲ್ಲಿನ ಚರಂಡಿ ಸ್ವಚ್ಛಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಮದ ನೈರ್ಮಲ್ಯ ಕಾಪಾಡುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ವಿಫಲವಾಗಿದ್ದು, ಗ್ರಾಮದ ಸಣ್ಣ-ಪುಟ್ಟ ಚರಂಡಿಗಳು ಹೂಳು ತುಂಬಿದೆ. ಚರಂಡಿಗಳಲ್ಲಿ ಕಸ ಬೆಳೆದು ಕಾಣದಂತೆ ಮಾಯವಾಗಿದ್ದು, ಚರಂಡಿಯಲ್ಲಿ ಹರಿಯುವ ನೀರು ಮುಂದೆ ಹೋಗದೇ ನಿಂತಲ್ಲೇ ನಿಂತಿದೆ ಗ್ರಾಮದ ತುಂಬೆಲ್ಲ ದುರ್ನಾತ ಹರಡಿದೆ. ಇನ್ನು ಕೆಲವು ಚರಂಡಿ ನೀರು ರಸ್ತೆ, ಮನೆಗಳ ಮುಂದೆ ಹರಿಯುತ್ತಿದೆ. ಈ ಸಂಬಂಧ ಗ್ರಾಮದ ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ, ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಸ್ಥಳೀಯರು ಮಾತನಾಡಿ ಇದು ಮಳೆಗಾಲ ಆಗಿರುವುದರಿಂದ ಮಳೆ ಬಿದ್ದಾಗ ಚರಂಡಿಗಳು ತುಂಬಿ ನೀರು ಮುಂದೆ ಹೋಗಲು ಸಾಧ್ಯವಾಗದೆ ಅಕ್ಕ ಪಕ್ಕದ ಮನೆಗೆ ನೀರು ನುಗ್ಗಿ ಸಮಸ್ಯೆ ಉಂಟು ಮಾಡುತ್ತದೆ, ಹಾಗೂ ಕೊಳಚೆ ನೀರು ಚರಂಡಿಯಲ್ಲೇ ನಿಂತು ಕೊಳೆತು ನಾರುವುದರಿಂದ ಕೆಟ್ಟ ವಾಸನೆ ಬಂದು ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಓಡಾಡುವಂತಾಗಿದೆ, ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಮಲೇರಿಯಾ, ಟೈಫಾಯಿಡ್, ಡೆಂಗ್ಯೂ ದಂತಹ ಅನೇಕ ರೋಗಗಳು ಹರಡಲು ಕಾರಣವಾಗಿದೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಈ ಜ್ವಲಂತ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಕುಮಾರ, ರಂಗ ಬೋಳೆಗೌಡ, ಜಯಲಕ್ಷ್ಮಿ ಕೃಷ್ಣೆಗೌಡ, ಶಿವೇಗೌಡ, ರೇವನಾಯಕ, ಕೃಷ್ಣೆಗೌಡ, ನಾಗೇಶ್ ಗೋವಿಂದೆಗೌಡ, ಸುಂದರಮ್ಮ ಪುಟ್ಟೇಗೌಡ, ಅನು ನಾಗೇಶ್, ಹಾಗೂ ಮತ್ತಿತರರು ಇದ್ದರು..

*ವರದಿ,ರಾಜು ಜಿ ಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow