ಅಸ್ಪೃಶ್ಯತೆ ಅಳಿಯಲಿ,ಮನುಷ್ಯತ್ವ ಉಳಿಯಲಿ

ಅಸ್ಪೃಶ್ಯತೆ ಅಳಿಯಲಿ,ಮನುಷ್ಯತ್ವ ಉಳಿಯಲಿ

ಇಂದು ಮೈಸೂರು ಪುರಭವನದಲ್ಲಿ *ದಲಿತ ಸಂಘರ್ಷ ಸಮಿತಿ ಮೈಸೂರು* ವತಿಯಿಂದ ಸಂವಿಧಾನದ ಶಿಲ್ಪಿ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್, ವಿಶ್ವ ಮಾನವ ಕುವೆಂಪು ಇವರ ಆಶಯಗಳನ್ನೊಳಗೊಂಡ "*ಅಸ್ಪೃಶ್ಯತೆ ಅಳಿಯಲಿ,ಮನುಷ್ಯತ್ವ ಉಳಿಯಲಿ*" ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಡಾ!! ಅಂಬೇಡ್ಕರ್ ವಾದಿ *ಶ್ರೀ ಸತೀಶ್ ಜಾರಕಿಹೊಳಿ ಸಾಹೇಬರ ಸುಪುತ್ರರಾದ ಯುವನಾಯಕ ಶ್ರೀ ರಾಹುಲ್ ಜಾರಕಿಹೊಳಿ* ಅವರು ಭಾಗವಹಿಸಿ ಬಹಳ ಅತ್ಯುತ್ತಮವಾಗಿ ವಿಚಾರ ಸಂಕಿರಣದಲ್ಲಿ ತಮ್ಮ ಅತ್ಯಮೂಲ್ಯವಾದ ಸಲಹೆಗಳನ್ನು ನೀಡುವ ಮೂಲಕ ಭಾಷಣ ಮಾಡಿದರು.

ಈ ವಿಚಾರ ಸಂಕಿರಣದಲ್ಲಿ *ಮಾಜಿ ಶಾಸಕರಾದ ಡಾ!! ಯತೀಂದ್ರ ಸಿದ್ದರಾಮಯ್ಯ* ಅವರು, ಡಾ.ಎಸ್.ತುಕರಾಮ್ ರವರು ವಿಚಾರ ಮಂಡನೆ ಮಾಡಿದರು.ಅಧ್ಯಕ್ಷತೆಯನ್ನು ಉದ್ದನೂರು ಮಹದೇವನಾಯಕರು ವಹಿಸಿದರು.

ಗೋಷಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ *ಶ್ರೀ ಎಸ್.ಸಿ.ಬಸವರಾಜು*,ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ *ರಾಜ್ಯಾಧ್ಯಕ್ಷರಾದ ದೇವರಾಜ್ ಟಿ ಕಾಟೂರು*,ದಿ.ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ *ಎಸ್.ಆರ್.ರವಿಕುಮಾರ್* ಹಾಜರಿದ್ದರು.

ಕಾರ್ಯಕ್ರಮ ಆಯೋಜಕರಾದ ದೇವಗಳ್ಳಿ ಸೋಮಶೇಖರ್,ಮಂಜುನಾಥ್ ಮುರುಡಗಳ್ಳಿ,ಪ್ರಸನ್ನ ತಳೂರು,ಕಾರ್ಯ ಬಸವಣ್ಣ,ಹುನಗಳ್ಳಿ ಗೋವಿಂದ ಉಪಸ್ಥಿತರಿದ್ದರು

.

What's Your Reaction?

like

dislike

love

funny

angry

sad

wow