ಸೀಮೆಣ್ಣೆ ಕುಮಾರ ಗುಂಡು ಹಾರಿಸಿ ಅಣ್ಙನ ಮಗನನ್ನೆ ಕೊಂದ ರೌಡಿ ಶೀಟರ್ ಎಂದು ಗುರುತಿಸಲಾಗಿದೆ

ಸೀಮೆಣ್ಣೆ ಕುಮಾರ ಗುಂಡು ಹಾರಿಸಿ ಅಣ್ಙನ ಮಗನನ್ನೆ ಕೊಂದ ರೌಡಿ ಶೀಟರ್  ಎಂದು ಗುರುತಿಸಲಾಗಿದೆ

ಗುಂಡಿಕ್ಕಿ ವ್ಯಕ್ತಿ ಹತ್ಯೆ ಮಾಡಿದ ರೌಡಿಶೀಟರ್.

ಮಂಡ್ಯ ಜಿಲ್ಲೆ ನಾಗಮಂಗಲ-ಕೆ.ಆರ್.ಪೇಟೆ ಗಡಿಗ್ರಾಮ ಹನುಮನಹಳ್ಳಿ ಗ್ರಾಮದಲ್ಲಿ ಗುಂಡಿನ ಸದ್ದು.*

ರೌಡಿ ಶೀಟರ್ ನಿಂದ ಸ್ವಂತ ಅಣ್ಣನ ಮಗನ ಹತ್ಯೆ ಮಾಡಿರುವ ಘಟನೆ ನಡೆದಿದೆ. 

*ಸೀಮೆಣ್ಣೆ ಕುಮಾರ ಗುಂಡು ಹಾರಿಸಿ ಅಣ್ಙನ ಮಗನನ್ನೆ ಕೊಂದ ರೌಡಿ ಶೀಟರ್ ಎಂದು ಗುರುತಿಸಲಾಗಿದೆ*

ಮಂಡ್ಯ ಜಿಲ್ಲೆಯ ನಾಗಮಂಗಲ ಮತ್ತು ಕೆ.ಆರ್.ಪೇಟೆ ತಾಲ್ಲೂಕಿನ ಗಡಿ ಗ್ರಾಮ ಹನುಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಸಹೋದರರ ನಡುವೆ ಜಮೀನಿನ ವಿವಾದದ ಹಿನ್ನೆಲೆ ಗುಂಡಿಕ್ಕಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಹನುಮನಹಳ್ಳಿ ಗ್ರಾಮದ ವಾಸು( ವಿಷಕಂಠ) ಮತ್ತು ಆತನ ತಮ್ಮ ಸೀಮೆಣ್ಣೆ ಕುಮಾರ್ ನಡುವೆ ಜಮೀನಿನ ಕಲಹವು ಹತ್ಯೆಯಲ್ಲಿ ಕೊನೆಗೊಂಡಿದೆ.

ಜಮೀನು ಇತ್ಯರ್ಥಕ್ಕೆ ಇಂದು ಹನುಮನಹಳ್ಳಿಯಲ್ಲಿ ಮಾತುಕತೆಗೆ ಕರೆದಿದ್ದ ಸೀಮೆಣ್ಣೆ ಕುಮಾರ್ 

ಮಾತುಕತೆ ವೇಳೆ ಮಾತಿನ‌ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ತನ್ನ ಅಣ್ಣನ ಮಗ ಜೈಪಾಲ್(24) ಮೇಲೆ 

3 ಸುತ್ತು ಗುಂಡು ಹಾರಿಸಿ ಹತ್ಯೆ ‌ಮಾಡಿದ್ದಾನೆ.

ಗುಂಡೇಟಿನಿಂದ ಜೈಪಾಲ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ

ನಾಗಮಂಗಲದ ಸಾರ್ವಜನಿಕ ಆಸ್ಪತ್ರೆಗೆ ಮೃತ ದೇಹ ರವಾನೆ ಮಾಡಿದ್ದಾರೆ.

ಸ್ಥಳಕ್ಕೆ ಮಂಡ್ಯ ಜಿಲ್ಲಾ ಪೋಲೀಸ್ ವರಿಷ್ಡಾಧಿಕಾರಿ ಯತೀಶ್ ಸೇರಿದಂತೆ ಪೋಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೌಡಿ ಶೀಟರ್ ಆಗಿರುವ ಸೀಮೆಣ್ಣೆ ಕುಮಾರ್ ಘಟನೆ ಬಳಿಕ ಗ್ರಾಮದಿಂದ ನಾಪತ್ತೆಯಾಗಿದ್ದಾನೆ. ಈತನ ಬಂಧನಕ್ಕೆ ಪೋಲೀಸರು ವ್ಯಾಪಕ ಶೋಧ ಕೈಗೊಂಡಿದ್ದಾರೆ.

ಘಟನೆ ಕುರಿತು ಬಿಂಡಿಗನವಿಲೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

What's Your Reaction?

like

dislike

love

funny

angry

sad

wow