ಕೆ.ಆರ್.ಪೇಟೆ : ಇಬ್ಬರ ನಡುವೆ ಜಗಳ ಕೊಲೆಯಲ್ಲಿ ಅಂತ್ಯ..!

ಕೆ.ಆರ್.ಪೇಟೆ : ಇಬ್ಬರ ನಡುವೆ ಜಗಳ ಕೊಲೆಯಲ್ಲಿ ಅಂತ್ಯ..!

ಕೆ.ಆರ್.ಪೇಟೆ : ಇಬ್ಬರ ನಡುವೆ ಜಗಳ ಕೊಲೆಯಲ್ಲಿ ಅಂತ್ಯ..!

ಕೆ.ಆರ್.ಪೇಟೆ ತಾಲ್ಲೋಕಿನ ಶೀಳನೆರೆ ಹೋಬಳಿಯ ಮಲ್ಕೋನಹಳ್ಳಿ ಗ್ರಾಮದಲ್ಲಿ ಇಬ್ಬರ ನಡುವೆ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು ಯ ಆರೋಪಿಗಳು ನಾಪತ್ತೆಯಾಗಿರುವ ಘಟನೆ ಮಂಗಳವಾರ ರಾತ್ರಿ ಈ ಘಟನೆ ಜರುಗಿದೆ,

ಕೆ.ಆರ್.ಪೇಟೆ ತಾಲ್ಲೋಕಿನ ಶೀಳನೆರೆ ಹೋಬಳಿಯ ಮಲ್ಕೋನಹಳ್ಳಿ ಗ್ರಾಮದಲ್ಲಿ ಇಬ್ಬರ ನಡುವೆ ನೆಢೆಯುತ್ತಿದ್ದ ಜಗಳದಲ್ಲಿ ಕೊನೆಗೂ ಕೊಲೆಯಲ್ಲಿ ಅಂತ್ಯ ಕಂಡಿದ್ದು 32 ವರ್ಷದ ಯೋಗೇಶ್ ಮೃತ ದುರ್ದೈವಿಯಾಗಿದ್ದಾರೆ, ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಗ್ರಾಮದ ಪ್ರದೀಪ್(31)

, ತಾಯಿ ಭಾಗ್ಯಮ್ಮ(45),ಪದೇಪದೇ ಯೋಗೇಶ್ ರವರ ಮೇಲೆ ಜಗಳ ಮಾಡುತ್ತಿದ್ದರೆನ್ನಲಾಗಿದ್ದು ನೆನ್ನೆ ಸಂಜೆ ಮತ್ತೆ ಎಂದಿನಂತೆ ಜಗಳ ತೆಗೆದಿದ್ದಾರೆ ಭಾಗ್ಯಮ್ಮ,ಪ್ರದೀಪ್ ಮತ್ತು ಮೃತ ಯೋಗೇಶ್ ನಡುವೆ ಮಾತಿಗೆ ಮಾತು ಬೆಳೆದು ಆರೋಪಿ ಪ್ರದೀಪ್ ಯೋಗೇಶ್ ರವರ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದು ಯೋಗೇಶ್ ಸ್ಥಳದಲ್ಲೆ ಕುಸಿದು‌ ಬಿದ್ದಿದ್ದಾರೆ ತಕ್ಷಣವೇ ಕೆ.ಆರ್. ಪೇಟೆಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಯೋಗೇಶ್ ಮೃತರಾಗಿದ್ದಾರೆ,

ಕೆ.ಆರ್‌.ಪೇಟೆ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಆರೋಪಿಗಳಾದ‌ ಪ್ರದೀಪ್ (31),ಭಾಗ್ಯಮ್ಮ(45), ವಿರುದ್ದ ಪ್ರಕರಣ ದಾಖಲಿಸಿದ್ದಾರೆ ಆರೋಪಿಗಳು ನಾಪತ್ತೆಯಾಗಿದ್ದು ಆರೋಪಿಗಳನ್ನು ಬಂದಿಸಲು ಪೋಲಿಸರು ಬಲೆ ಬೀಸಿದ್ದಾರೆ,

What's Your Reaction?

like

dislike

love

funny

angry

sad

wow