ಕಾಂಗ್ರೆಸ್ ಮುಖಂಡ, ಸಿ ಎಂ ' ಪ್ರಧಾನ ಕಾರ್ಯದರ್ಶಿ ಶಶಿಧರ್ ಮರಟಿಕೊಪ್ಪಲು (ಗಂಜಿಗೆರೆ) ಅವರ 50ನೇ ವರ್ಷದ ಹುಟ್ಟುಹಬ್ಬವನ್ನು ಪಟ್ಟಣದ ಹೊರವಲಯದ ಮಾತೃಭೂಮಿ ಉಚಿತ ವೃದ್ದಾಶ್ರಮದಲ್ಲಿ ಸರಳವಾಗಿ, ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಕಾಂಗ್ರೆಸ್ ಮುಖಂಡ, ಸಿ ಎಂ ' ಪ್ರಧಾನ ಕಾರ್ಯದರ್ಶಿ ಶಶಿಧರ್ ಮರಟಿಕೊಪ್ಪಲು (ಗಂಜಿಗೆರೆ) ಅವರ 50ನೇ ವರ್ಷದ ಹುಟ್ಟುಹಬ್ಬವನ್ನು ಪಟ್ಟಣದ ಹೊರವಲಯದ ಮಾತೃಭೂಮಿ ಉಚಿತ ವೃದ್ದಾಶ್ರಮದಲ್ಲಿ ಸರಳವಾಗಿ, ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಕೆ ಆರ್ ಪೇಟೆ:ಮಾತೃಭೂಮಿ ಉಚಿತ ವೃದ್ದಾಶ್ರಮದಲ್ಲಿರುವ ವೃದ್ದರಿಗೆ ಸಿಹಿ ಊಟವನ್ನು ವಿತರಣೆ ಮಾಡಿ ಹಾಗೂ ವೃದ್ದಾಶ್ರಮದ ಆವರಣದಲ್ಲಿ ಗಿಡ ನೆಟ್ಟು ನೀರುಣಿಸುವುದರ ಮೂಲಕ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿ ಬಳಿಕ ಮಾತನಾಡಿದ ಕರ್ನಾಟಕ ಪ್ರದೇಶ ಕುರುಬರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಕೆ ಪುರುಷೋತ್ತಮ್ ಉಳ್ಳವರು ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ದುಂದುವೆಚ್ಚಮಾಡಿ ಆಚರಿಸುಕೊಳ್ಳುತ್ತಿರುವ ಸಂದರ್ಭದಲ್ಲಿ ಸರಳ ಸಜ್ಜನ ರಾಜಕಾರಣಿ ಶಶಿಧರ್ ತಮ್ಮ‌ 50ನೇ ವರ್ಷದ ಹುಟ್ಟುಹಬ್ಬವನ್ನು ವೃದ್ದಾಶ್ರಮದಲ್ಲಿ ಆಚರಿಸುಕೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ.ಯಾರೇ ಆಗಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದು ತಪ್ಪಲ್ಲ.ಆದರೆ ಹುಟ್ಟುಹಬ್ಬದ ನೆಪದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸರಂಕ್ಷಣೆ ಮಾಡುವ ಜವಾಬ್ದಾರಿಯನ್ನು ನಾವೆಲ್ಲರೂ ಸೇರಿ ಮಾಡಬೇಕು.ಪಟಾಕಿ,ದೊಡ್ಡ ದೊಡ್ಡ ಕೇಕ್ ಗಳನ್ನು ಕತ್ತರಿಸಿ ಆಚರಿಸುವ ಬದಲು ಅನಾಥಾಶ್ರಮ,ವೃದ್ದಾಶ್ರಮದಲ್ಲಿ ಆಚರಿಸಿ ಅಲ್ಲಿರುವ ಅನಾಥರು ಬಗ್ಗೆ ವೃದ್ದರಿಗೆ ದೈರ್ಯ ತುಂಬುವ ಕೆಲಸವನ್ನು ಮಾಡಬೇಕು‌.ವೃದ್ದರಿಗೆ,ಅನಾಥರಿಗೆ ಸಹಾಯ ಮಾಡಿದರೆ ಅವರಲ್ಲಿ ದೇವರನ್ನು ಕಾಣಬಹುದು ಎಂದರು. ಅದ್ದರಿಂದ ಭಗವಂತ ಶಶಿಧರ್ ಮರಟಿಕೊಪ್ಪಲು ಅವರಿಗೆ ಆರೋಗ್ಯ ಆಯಸ್ಸು ಅಧಿಕಾರ ಕರುಣಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.

 ಪಾಂಡವಪುರ ಮುಖಂಡ ವೆಂಕಟೇಶ್,ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಕ್ಕಿಹೆಬ್ಬಾಳು ದಿವಾಕರ್,ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆ ಎಸ್ ಚಂದ್ರು,ಯುವ ಘಟಕದ ಕಾರ್ಯಾಧ್ಯಕ್ಷ ಚೌಡೇನಹಳ್ಳಿ ರವಿ, ಯುವ ಘಟಕದ ಉಪಾಧ್ಯಕ್ಷ ಹಿರಿಕಳಲೆ ಎಲ್ ಐ ಸಿ ರವಿ,ಅಗ್ರಹಾರ ಸತೀಶ್, ಮಲ್ಲೇನಹಳ್ಳಿ ಕೃಷ್ಣ, ಮಾತೃಭೂಮಿ ಉಚಿತ ವೃದ್ದಾಶ್ರಮದ ವ್ಯವಸ್ಥಾಪಕ ನಾಗಣ್ಣ ಸೇರಿದಂತೆ ಮತ್ತಿತರರು ಇದ್ದರು.

 *ವರದಿ,ರಾಜು ಜಿ ಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow