*ಮನೆ ಮುಂದೆ ರಸ್ತೆ ಬದಿಗಳಲ್ಲಿ ಊರ ಒಳಗಡೆ ತಿಪ್ಪೆಗಳ ರಾಶಿ ರಾಶಿ ಇದರಿಂದ ಹಲವು ರೋಗಕ್ಕೆ ತುತ್ತಾಗಿರುವ ಗ್ರಾಮಸ್ಥರು ಎರಡು ದಿನದೊಳಗಡೆ ತಿಪ್ಪೆ ತೆಗಿಸದಿದ್ದರೆ ಕಾನೂನು ಕ್ರಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯ್ ಎಚ್ಚರಿಕೆ*

*ಮನೆ ಮುಂದೆ ರಸ್ತೆ ಬದಿಗಳಲ್ಲಿ ಊರ ಒಳಗಡೆ  ತಿಪ್ಪೆಗಳ ರಾಶಿ ರಾಶಿ ಇದರಿಂದ ಹಲವು ರೋಗಕ್ಕೆ ತುತ್ತಾಗಿರುವ ಗ್ರಾಮಸ್ಥರು ಎರಡು ದಿನದೊಳಗಡೆ ತಿಪ್ಪೆ ತೆಗಿಸದಿದ್ದರೆ ಕಾನೂನು ಕ್ರಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯ್ ಎಚ್ಚರಿಕೆ*

 

ಕೆ ಆರ್ ಪೇಟೆ ತಾಲ್ಲೂಕು ಕಿಕ್ಕೇರಿ ಹೋಬಳಿ ಯಾಲಾದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣವು ಗ್ರಾಮಠಾಣಕ್ಕೆ ಸೇರಿದ್ದು

 ಐಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾಲಾದಹಳ್ಳಿ

ಗ್ರಾಮದ ಶಾಲೆಯ ಆವರಣವು ಗೋಮಾಳಕ್ಕೆ ಸೇರಿದೆ ಎಂದು ನಿಮಗೆ ಅರ್ಜಿ ನೀಡಿರುವುದು ಸರಿಯಷ್ಟೆ. ಆದರೆ ಆಟದ ಮೈದಾನ

ಶಾಲಾ ಆವರಣದ ಜಾಗವು ಗ್ರಾಮಠಾಣಕ್ಕೆ ಸೇರಿದ್ದು, 14 ನೇ ಹಣಕಾಸು ಯೋಜನೆಯಡಿ

ಅಭಿವೃದ್ಧಿ ಕಾಮಗಾರಿಯನ್ನು ತೆಗೆದುಕೊಂಡಿದ್ದು ಕಾಮಗಾರಿಯು ಮುಕ್ತಾಯಗೊಂಡಿರುತ್ತದೆ. ಈ ಸ್ಥಳಗಳಲ್ಲಿ ಹಸು ಧನ ಕರುಗಳನ್ನು ಕಟ್ಟಾಕುವ ಮೂಲಕ ತಿಪ್ಪೆಗಳನ್ನು ಹಾಕಿ ಸ್ವಚ್ಛತೆ ಕಾಪಾಡದೇ ಸೊಳ್ಳೆಗಳು ರೋಗರೋ ಜನಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ದೂರಿನ ಮೇರೆಗೆ ಐಕನಹಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ವಿಜಯ್ ಸ್ಥಳ ಪರಿಶೀಲಿಸಿ ತಿಪ್ಪೆ ಹಾಕಿದವರು ನಾಗೇಶ್ ಸನ್ ಆಫ್ ಚನ್ನಮಲ್ಲಪ್ಪ ಮಂಜುನಾಥ್ ಬಸವರಾಜ್ ಶಿವಪ್ಪ ಶಂಬು ಚೆನ್ನಮಲ್ಲಪ್ಪ ಅವ್ವಯ್ಯ ಪುಟ್ಟರಾಜ್ ಪದ್ಮರಾಜಶೇಖರ್ ಕುಮಾರ್ ಕರಿಯಪ್ಪ ವಾಸು ಮಾದಪ್ಪ ಯೋಗೇಶ್ ಮಾದಪ್ಪ ಇವರುಗಳನ್ನು ಕರೆಸಿ ತಿಳುವಳಿಕೆ ಹೇಳಿ ತಿಪ್ಪೆಗಳನ್ನು ತೆರವುಗೊಳಿಸಿ ಇನ್ನು ಮುಂದೆ ಸ್ವಚ್ಛತೆ ಕಾಪಾಡದೇ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದೆ ಆದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಐಕನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯ್ ತಿಳಿಸಿದರು,

 ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಮಾದಪ್ಪ ಪಟೇಲ ಅಣ್ಣಯ್ಯ, ಮಂಜುನಾಥ್ ಗೀತಾ,ಪರಮೇಶ್, ರವಿ, ಯಲದಳ್ಳಿ ಗ್ರಾಮಸ್ಥರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮ ಠಾಣೆಯ ಸ್ಥಳವನ್ನು ಅಳತೆ ಮಾಡಿ ಗ್ರಾಮಕ್ಕೆ ಅನುಕೂಲವಾಗುವಂತೆ ಅವಕಾಶ ಮಾಡಿ ಗ್ರಾಮವನ್ನು ಸ್ವಚ್ಛತೆಯಾಗಿರಲು ಮಾಡಿಕೊಡಬೇಕೆಂದು ಮನವಿ ಮಾಡಿದರು, ಸ್ಥಳದಲ್ಲಿ ಕುದ್ದು ಹಾಜರಾಗಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯ್ ಇನ್ನ ಎರಡು ದಿನದೊಳಗಡೆ ತೆರವುಗೊಳಿಸದಿದ್ದರೆ ನೈರ್ಮಲ್ಯತೆ ಮತ್ತು ಸ್ವಚ್ಛತೆ ಅಡಿಯಲ್ಲಿ ದೂರು ನೀಡಿ ಸೂಕ್ತ ಕಾನೂನು ಕ್ರಮ ಜರುಗುಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.

 *ವರದಿ,ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow