*ಕುತಂತ್ರ ಹೆಣೆಯದೆ ಸಾದಸೀದಾ ಹೋರಾಟವಾಗಿದಿದ್ದರೆ ಮೈಸೂರ್ ಹೈದರ್ ಮದಕರಿಯ ಕೈದಿಯಾಗುತ್ತಿದ್ದ...ರಾಜು ಜಿ.ಪಿ.*

*ಕುತಂತ್ರ ಹೆಣೆಯದೆ ಸಾದಸೀದಾ ಹೋರಾಟವಾಗಿದಿದ್ದರೆ ಮೈಸೂರ್ ಹೈದರ್ ಮದಕರಿಯ ಕೈದಿಯಾಗುತ್ತಿದ್ದ...ರಾಜು ಜಿ.ಪಿ.*

ಕೆ ಆರ್ ಪೇಟೆ ರಾಜ ವೀರ ಮದಕರಿ ನಾಯಕ ರವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಮದಕರಿ ನಾಯಕ ಭಾವಚಿತ್ರಕ್ಕೆ ಮಾಡುವ ಮೂಲಕ ಗೌರವ ಸಮರ್ಪಣೆ ಮಾಡಿ ಮಾತನಾಡಿದ ನಾಯಕ ಸಮಾಜದ ಮುಖಂಡರಾದ ಹಾಗೂ ಪತ್ರಿಕರ್ತರಾದ ರಾಜು ಜಿ ಪಿ ಮಾತನಾಡಿ ಪಾಳೇಗಾರರಲ್ಲಿ ಅತ್ಯಂತ ಶೂರರು ಇದ್ದರೆ ಅದು ಚಿತ್ರದುರ್ಗ ನಾಯಕ ಅರಸರು ಮಾತ್ರ. ಒಂದು ವೇಳೆ ಒಳಗಿನ ಶತ್ರುಗಳು ಕುತಂತ್ರ ಮಾಡದೆ ಇದ್ದಿದ್ದರೆ ಮೈಸೂರ್ ಹೈದರ್ ಮದಕರಿಯ ಸೈನ್ಯಕ್ಕೆ ಸಿಕ್ಕಿ ಸೆರೆಯಾಗಿತ್ತಿದ್ದ, ಇಂದಿನ ಮೈಸೂರು ಸಂಸ್ಥಾನದವರೆಗೂ ದುರ್ಗ ವಿಸ್ತರಣೆ ಆಗುತ್ತಿತ್ತು ಎನ್ನುವ ಇತಿಹಾಸದ ವಿಶ್ಲೇಷಣೆ ಇರುವುದು ಚಿತ್ರದುರ್ಗದ ಅರಸರ ಶೌರ್ಯ ಪ್ರಸ್ತುತತೆಯನ್ನು ಪಡೆಯುತ್ತದೆ. ಹೈದರ್ ಎಷ್ಟೇ

ಕಾಡಿದರೂ ಪರಾಕ್ರಮ ತೈಜಿಸದೆ ಮೋಸದಿಂದ ದಾರುಣವಾಗಿ ಅಂತ್ಯ ಕಂಡ ವೀರ ಮದಕರಿ ನಾಯಕ ಇದೆ ಗಂಡು ಮೆಟ್ಟಿದ ಮಣ್ಣಿನ ಶೂರ, ದುರ್ಗದ ನಾಯಕರು ಪುಂಡ ಅಥವಾ ಪುಕ್ಕಲ ಅಥವಾ ಹಾವಳಿ ಪಾಳೇಗಾರರಲ್ಲ ಬಹುಕಾಲದ ವರೆಗೂ ಅರಸರಾಗಿ

ಮೆರೆದವರು. ಮೈಸೂರು ಹೈದರ್ ಇದೆ ದುರ್ಗದ ರಣಬೇಟೆಗಾರ ಪಡೆಯನ್ನೇ ಹೆಚ್ಚು ನಂಬಿದ್ದು,ಪ್ರತಿ ಲಡಾಯಿಯಲ್ಲೂ ಮದಕರಿಯ ಪಡೆದುಕೊಳ್ಳುತ್ತಿದ್ದ ಬಿರುದು

ಬಾವಲಿ ಹೈದರ್ ರಾಜ್ಯ ವಿಸ್ತರಣೆಗೆ ಪ್ರಮುಖಕಾರಣವಾಗಿತ್ತು.

ಮದಕರಿನಾಯಕನ ಕೇವಲ ಒಂದು ಸಣ್ಣ ತುಕುಡಿ ಶತ್ರು ರಾಜ್ಯ ಗಡಿಯಲ್ಲಿ ಬಿಡು ಬಿಟ್ಟಿತೆಂದರೆ ಅಲ್ಲಿನ ರಾಜ ಅಥವಾ

ಪಾಳೇಗಾರ ತಮ್ಮ ಸಂಸ್ಥಾನದ ವಕೀಲರ, ಮಂತ್ರಿಗಳ ಸಂಧಾನ ನಿಯೋಗ ಬರುತ್ತಿತೆ ವಿನಃ ಪ್ರತಿಭಟನೆ ಮಾಡಿದ್ದು

ಅತ್ಯಂತ ವಿರಳ. ಮದಕರಿ ನಾಯಕನಿಗೆ ಬೇಕಿದ್ದದ್ದು ರಣ ರೋಚಕ ಬಿರುದು,ಬಾವಲಿಗಳೇ ವಿನಃ ಸಾಮ್ರಾಜ್ಯ ತನ್ನಲ್ಲೇ ಇರಬೇಕೆಂಬಲ್ಲ. ಆದರೆ ಅತ್ಯಂತ ಬುದ್ಧಿವಂತ ಮೈಸೂ‌ ಹೈದರ್ ತನ್ನ ಸುತ್ತಲೂ ಹಿಂದೂ ಮುಸ್ಲಿಂ ವೀರಶೈವ, ಜೈನ ಇನ್ನಿತರ ಮೇದವಿ ಘನ ಪಂಡಿತರನ್ನು ಯುದ್ಧ ತಂತ್ರಜ್ಞರ ಹಾಗೂ ಪರಿಣಿತರನ್ನು ಮಗ್ಗಲಲ್ಲಿ ಇಟ್ಟುಕೊಂಡು ನಿರಾಯಾಸವಾಗಿ ರಾಜ್ಯ ವಿಸ್ತರಣೆ ಮಾಡಿ ಆದಾಯ ಮಾಡುತ್ತಿದ್ದ,ಮೆರೆಯುತ್ತಿದ್ದ. ಸಂದರ್ಭ ನೋಡಿ ತಂತ್ರವೋ,ಕುತಂತ್ರವೋ ತನ್ನ ಧರ್ಮಯುದ್ದಕ್ಕೂ ಸಿದ್ಧನಿದ್ದ.

ಇದೆ ಧರ್ಮಯುದ್ಧದ ನೆಪದಲ್ಲೇ ಮದಕರಿಯನ್ನು ಮುಗಿಸಿಬಿಟ್ಟ....

ಹೈದರ್ ತುರುಕದಳಕಿಂತಲು ಹೆಚ್ಚಾಗಿ ಶೈವ ಮತ್ತು ಬ್ರಾಹ್ಮಣ ಪಂಥದ ಒಳ ಜಗಳದ ಸಂದರ್ಭದಲ್ಲಿ ಹೈದರ್ ಮೈಸೂರ್

ಸೇನೆ ದಾಳಿ ಮಾಡಿದ್ದು ದುರ್ಗದ ಮೇಲೆ ಬಾರಿ ಪರಿಣಾಮ ಬೀರಿ ಅಲ್ಲಿನ ಘನ ಪಂಡಿತೋತ್ತಮರು ಹೈದರ್ ವಕೀಲ

ಪೂರ್ಣಯ್ಯನಿಂದ ಬಿಕರಿಯಾದದ್ದು ದುರ್ಗದ ಹಣೆ ಬರಹ ಬದಲಾಗಿತ್ತು ಜೊತೆಗೆ ಮರಾಠರೂ ಸಹ ಬಾರಿ ಲಂಚ ಪಡೆದು ತಟಸ್ಥರಾದದ್ದು ದುರ್ಗದ ಜಂಗಬಲವನ್ನೇ ಅಡಗಿಸಿ ಬಿಟ್ಟಿತು.

ಸಂಧಾನದ ಕುತಂತ್ರಕ್ಕೆ ಮದಕರಿ ಮತ್ತು ಅವನ ಇಡೀ ಕುಟುಂಬ ಐತಿಹಾಸಿಕ ಬೆಲೆ ತೆರಬೇಕಾಯಿತು. ಒಂದು ವೇಳೆ 3

ರಿಂದ 4 ವರ್ಷಗಳ( ಮದಕರಿ ಮೋಸದಿಂದ ಸೆರೆಯಾದದ್ದು

1779 & ಹೈದರ್ ಸೃತ್ತಿದ್ದು 1784)ವರೆಗೆ ಸದಾಸೀದ ಯುದ್ಧವಾಗಿದಿದ್ದರೆ #ಮರಾಠರ ಮಿತ್ರ ಪಡೆ ಸೇರುತ್ತಿದ್ದ

ಮದಕರಿ ನಿರಾಯಾಸವಾಗಿ ಹೈದರ್ಗೆ ಮಣ್ಣು ಮುಕ್ಕಿಸುತ್ತಿದ್ದ.ಮದಕರಿಯ ಖಡ್ಗ ಛಾಪಿನಿಂದ ಬಹುತೇಕ ರಾಜ್ಯಗವನ್ನು ಹೈದರ್ ಮದಕರಿ ಇಲ್ಲದೆ ಎಲ್ಲವನ್ನೂ ಕಳೆದುಕೊಂಡದ್ದುಇತಿಹಾಸ. ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ನೂತನ ಸದಸ್ಯರಾದ ಎಆರ್ ರಾಜನಾಯಕ ರವರಿಗೆ ಮತ್ತು ವಿ ಎಸ್ ಎಸ್ ಸಹಕಾರ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದ ಕೆ ಆರ್ ಪೇಟೆ ಟೌನ್ ರಾಜ ನಾಯಕ ರವರಿಗೆ ಪಂಚಯೋಜನ ಕೋರ್ ಕಮಿಟಿ ಸದಸ್ಯರಾದ ಲತಾ ರವರಿಗೆ ಕೃಷ್ಣರಾಜಪೇಟೆ ತಾಲೂಕು ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು ಹಿರಿಯ ಪತ್ರಕರ್ತರಾದ ಶ್ರೀನಿವಾಸ್ ಸರ್ಜನ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಾಲೂಕು ಸಂಘದ ಅಧ್ಯಕ್ಷರಾದ ಲೋಕೇಶ್ ವಿ, ಮಾಕವಳ್ಳಿ ರಂಗನಾಥ್ ಬಿಜೆಪಿ ರಾಜ್ಯ ಎಸ್‌ಟಿ ಮೋರ್ಚಾ ಸದಸ್ಯರಾದ ಮಹೇಶ್ ನಾಯಕ.ಕಡ್ಲೆ ಕಾಯಿ ಕೃಷ್ಣಣ್ಣ. ಗ್ಯಾಸ್ ತಮ್ಮಯ್ಯ. ವರಲಕ್ಷ್ಮಿ. ಡಾಣನಹಳ್ಳಿ ನಾರಾಯಣ ನಾಯಕ, ಚಂದ್ರ ನಾಯಕ, ನಾಗರಾಜ್ ನಾಯಕ, ವಿಶ್ವನಾಥ್, ನಾಗೇಶ್ ನಾಯಕ ಚೆಲುವ ನಾಯಕ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

 *ವರದಿ ರಾಜು ಜಿ ಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow