ಕತ್ತರಘಟ್ಟ ಗ್ರಾಮದಲ್ಲಿ ಹುಲ್ಲಿನ ಮೆದೆಯೊಳಗೆ ದಲಿತ ಯುವಕ ಜೀವಂತವಾಗಿ ದಹನವಾದ ಪ್ರಕರಣ

*ನಿಸ್ಪಕ್ಷಪಾತ ತನಿಖೆಗೆ ದಲಿತ ಮುಖಂಡರು ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ತಮಟೆ ಚಳುವಳಿ*,
*ಮೃತ ಯುವಕನ ಕುಟುಂಬಕ್ಕೆ ಸರ್ಕಾರಿ ಉದ್ಯೋಗಕ್ಕೆ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಆಗ್ರಹ*..
*ಸಾ
ವಿರಾರು ಜನರು ಹಾಗೂ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿ* .
*ಅಪರ ಪೊಲೀಸ್ ವರಿಷ್ಟಾಧಿಕಾರಿ ಚಿಕ್ಕತಿಮ್ಮಯ್ಯ ಅವರಿಂದ ಮನವಿ ಸ್ವೀಕಾರ*..
ದಲಿತ ಯುವಕನನ್ನು ಜೀವಂತವಾಗಿ ಸುಟ್ಟು ಹಾಕಿದ ಘಟನೆ ಸರ್ಕಾರಕ್ಕೆ ನಾಚಿಕೆಯಾಗಬೇಕು ದೇಶದಲ್ಲಿ ಹೆಚ್ಚಾಗಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ
ಆರೋಪಿಯ ರಕ್ಷಣೆಗೆ ನೀವು ನಿಂತಿದ್ದಿರಾ ನಿಮಗೆ ಖಾಕಿ ಬಟ್ಟೆ ಯಾಕೆ ಬೇಕು? ಡಿಎಸ್ ಪಿ, ಇನ್ಸ್ ಸ್ಪೆಕ್ಟರ್ ಅವರ ತಲೆದಂಡ ವಾಗಬೇಕು. ನಿಮ್ಮನ್ನ ಸುಮ್ಮನೆ ಬಿಡುವುದಿಲ್ಲ ನಿಮಗೆ ಮಾನವೀಯತೆ ಇಲ್ಲವಾ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೆ? ಏನಿದು ನಿಮ್ಮ ಮನೆಯ ಹೆಣ್ಣುಮಕ್ಕಳ ಕುಂಕುಮ ಅಳಿಸುವ ಕಾಲ ಬರುತ್ತದೆ.
ಸರ್ಕಾರಕ್ಕೆ 135 ಸೀಟು ಕೊಟ್ಟು, ದಲಿತ ಯುವಕನ ಸಾವಿನ ಬಗ್ಗೆ ತನಿಖೆ ನಡೆಸಿ ಶಿಕ್ಷೆ ಕೊಡಿಸುವಂತೆ ತಮಟೆ ಹೊಡೆದು ನಿಲ್ಲಬೇಕಾ.. ಗೃಹ ಸಚಿವರು ಹಾಗೂ ಎಸ್ ಪಿ ಯವರ ಗಮನಕ್ಕೆ ಘಟನೆಯ ಬಗ್ಗೆ ಗಮನ ಸೆಳೆದು, ಆರೋಪಿಗೆ ಉಗ್ರವಾದ ಶಿಕ್ಷೆ ಕೊಡಿಸಲು ಒತ್ತಾಯಿಸಿ ಗಮನಕ್ಕೆ ತಂದಿದ್ದೆವೆ
ಕತ್ತರಘಟ್ಟ ಗ್ರಾಮದಲ್ಲಿ ದಲಿತ ಯುವಕ ಜಯಕುಮಾರ್ ಜೀವಂತ ದಹನ ಪ್ರಕರಣವು ಎಸ್ ಐಟಿ ತನಿಖೆಯಾಗಬೇಕು
ಮೃತ ಜಯಕುಮಾರ್ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಬೇಕು
ದೂರು ಬರೆಯಲು ಫೋನಿನಲ್ಲಿ ಹೇಳಿ ಕೊಟ್ಟಿರುವವರು ಪತ್ತೆಯಾಗಬೇಕು.
ಕೊಲೆಮಾಡಿ ಮೆದೆಗೆ ಹೊರಗಿಸಿ ಮುಚ್ಚಿಟ್ಟಿದ್ದೀರಾ. ಆರೋಪಿಯನ್ನು ಕೂಡಲೇ ಬಂಧಿಸಿ, ಎಸ್ ಐಟಿ ತನಿಖೆ ಮಾಡಿಸಿ, ಆರೋಪಿಗೆ ಉಗ್ರವಾದ ಶಿಕ್ಷೆ ಕೊಡಿಸಿ.
*ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರವು ನಿಷ್ಕ್ರಿಯವಾದರೇ ನಾವೇ ನಮ್ಮ ಸಮುದಾಯ ರಕ್ಷಣೆ ಮಾಡಿಕೊಳ್ಳುತ್ತೆವೆ. ಜ್ಞಾನ ಪ್ರಕಾಶ ಸ್ವಾಮೀಜಿ ಗುಡುಗಿದರು*..
ಕೂಡಲೇ ಆರೋಪಿ ಅನಿಲ್ ಕುಮಾರ್ ನನ್ನು ಬಂಧಿಸಿ ಗಡಿಪಾರು ಮಾಡಬೇಕು. ಉಗ್ರವಾದ ಶಿಕ್ಷೆಯನ್ನು ಕೂಡಿಸಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.
ಕತ್ತರಘಟ್ಟದಲ್ಲಿ ದಲಿತ ಯುವಕ ಜೀವಂತವಾಗಿ ದಹನವಾದ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಗಂಭೀರವಾಗಿ ಗಮನಹರಿಸಬೇಕು. ಈ ಪ್ರಕರಣ ಗಂಭೀರವಾಗಿ ತೆಗೆದುಕೊಂಡಿದ್ದು ನ್ಯಾಯಸಿಗುವವರೆಗೂ ಹೋರಾಟವನ್ನು ಕೈಬಿಡುವುದಿಲ್ಲ ರಾಜ್ಯ ಬಿಎಸ್ ಪಿ ಅಧ್ಯಕ್ಷ ಡಾ.ಕೃಷ್ಣಮೂರ್ತಿ ಗುಡುಗಿದರು..
ಪ್ರತಿಭಟನೆಯಲ್ಲಿ ಸ್ಥಳೀಯ ಮುಖಂಡರಾದ ಡಿ. ಪ್ರೇಮಕುಮಾರ್, ಬಸ್ತಿ ರಂಗಪ್ಪ, ಸೋಮಸುಂದರ್, ರಾಜಯ್ಯ, ಮಾಂಬಳ್ಳಿ ಜಯರಾಮ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, BSP ರಾಜ್ಯ ಅಧ್ಯಕ್ಷ ಡಾ.ಕೃಷ್ಣಮೂರ್ತಿ. ನಾಯಕ ಹಿತರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷರಾದ ದ್ಯಾವಪ್ಪ ನಾಯಕ. ಬಿ ಶ್ರೀರಾಮುಲು ಅಭಿಮಾನಿ ಸಂಘದ ರಾಜ್ಯಾಧ್ಯಕ್ಷರಾದ ಹುಣಸೂರು ಪ್ರಭಾಕರ್. ಚೌಡೇನಹಳ್ಳಿ ದೇವರಾಜ್, ದೊಡ್ಡ ತಾರಹಳ್ಳಿ ಕುಮಾರ್, ಕೃಷ್ಣಾಪುರ ಗಿರೀಶ್. ಬದ್ರೇಶ್. ರುದ್ರೇಶ್. ಸೇರಿದಂತೆ ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
*ವರದಿ.ರಾಜು ಜಿ ಪಿ ಕಿಕ್ಕೇರಿ ಕೆ ಆರ್ ಪೇಟೆ*
What's Your Reaction?






