*_ಕೃಷ್ಣರಾಜಪೇಟೆ: ಕರುನಾಡು ಯುವಜನ ವೇದಿಕೆಯ ಪೂರ್ವಭಾವಿ ಸಭೆ...!!_*

*_ಕೃಷ್ಣರಾಜಪೇಟೆ: ಕರುನಾಡು ಯುವಜನ ವೇದಿಕೆಯ ಪೂರ್ವಭಾವಿ ಸಭೆ...!!_*

_ಕೃಷ್ಣರಾಜಪೇಟೆ ಪಟ್ಟಣದ ಮಾಧ್ಯಮ ಸ್ಟುಡಿಯೋ ಕಚೇರಿಯಲ್ಲಿ ಕರುನಾಡು ಯುವಜನ ವೇದಿಕೆಯ ಪೂರ್ವಭಾವಿ ಸಭೆಯನ್ನು ಜಿಲ್ಲಾ ಗೌರವಾಧ್ಯಕ್ಷರಾದ ಕೆಬಿಸಿ ಮಂಜುನಾಥ್ ರವರ ಮಾರ್ಗದರ್ಶನದಲ್ಲಿ ಜಿಲ್ಲಾ ಅಧ್ಯಕ್ಷರಾದ ಎಸ್.ರವಿ, ತಾಲೂಕು ಅಧ್ಯಕ್ಷರಾದ ಯುವರಾಜ್ (ಮನು) ರವರ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು,_

_ಇತ್ತೀಚೆಗೆ ಮಂಡ್ಯ-ಕೃಷ್ಣರಾಜಪೇಟೆ ಭಾಗದಲ್ಲಿ ಕರುನಾಡು ಯುವಜನ ವೇದಿಕೆ ಚಾಲನೆಯನ್ನು ಮಾಡಿದ್ದು ಮುಂದಿನ ದಿನಗಳಲ್ಲಿ ಸಂಘಟನೆಯ ಬಲವರ್ಧನೆಗೆ, ಹೋರಾಟದ ಮನೋಭಾವನೆಯುಳ್ಳ ಸೂಕ್ತವಾದ ಅಭ್ಯರ್ಥಿಗಳಿಗೆ ಜಿಲ್ಲಾ ಗೌರವಾಧ್ಯಕ್ಷರಾದ ಕೆಬಿಸಿ ಮಂಜುನಾಥ್ ರವರ ಮಾರ್ಗದರ್ಶನದಲ್ಲಿ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಯಿತು,_

*_(ಮಂಡ್ಯ ಜಿಲ್ಲಾ ಮಟ್ಟದ ಅಧ್ಯಕ್ಷರ ಆಯ್ಕೆ ಪಟ್ಟಿ)_*

_ಕಿಕ್ಕೇರಿ ಹೆಚ್.ಕೆ.ಮಂಜುನಾಥ್-ಜಿಲ್ಲಾ ಉಪಾಧ್ಯಕ್ಷರು, ಹೊಸಹೊಳಲು ಶ್ರೀನಿವಾಸ್-ಸಂಘಟನಾ ಕಾರ್ಯದರ್ಶಿ, ಕಿಕ್ಕೇರಿ ಜಿ.ಪಿ. ರಾಜು-ಉಪಾಧ್ಯಕ್ಷರು,_

*_(ಕೃಷ್ಣರಾಜಪೇಟೆ ತಾಲ್ಲೂಕು ಅಧ್ಯಕ್ಷರ ಆಯ್ಕೆ ಪಟ್ಟಿ)_*

_ಭಾವಜೀ ಚಂದ್ರು-ಗೌರವಾಧ್ಯಕ್ಷರು, ಸುಂದರೇಶ್ -ಪ್ರಧಾನ ಕಾರ್ಯದರ್ಶಿ, ಹೇಮಂತ್-ಉಪಾಧ್ಯಕ್ಷರು, ಶ್ಯಾಮ್ ಟೈಲರ್-ಉಪಾಧ್ಯಕ್ಷರು ಸ್ಯಾಮ್ ಸುಂದರ್-ಸಂಘಟನಾ, ಸುನೀಲ್ ಕುಮಾರ್-ಉಪಾಧ್ಯಕ್ಷರು, ದಾಸೇಗೌಡ ತಾಲ್ಲೂಕು ಸಂಚಾಲಕರು,_

*_(ಕೃಷ್ಣರಾಜಪೇಟೆ ನಗರ ಘಟಕದ ಅಧ್ಯಕ್ಷ ಆಯ್ಕೆ ಪಟ್ಟಿ)_*

_ರವಿ-ಪ್ರಧಾನ ಕಾರ್ಯದರ್ಶಿ, ಮೋಹನ್-ಉಪಾಧ್ಯಕ್ಷರು, ಲಕ್ಷ್ಮಣ ಸಂಚಾಲಕರು,_

_ಈ ಮೇಲ್ಕಂಡ ಅಭ್ಯರ್ಥಿಗಳನ್ನು ಒಮ್ಮತದ ನಿರ್ಣಯ ಕೈಗೊಂಡು ಆಯ್ಕೆ ಮಾಡಲಾಗಿದ್ದು, ಎಂದಿನಂತೆ ಸಂಘಟನೆಯ ಬಲಪಡಿಸುವ ನಿಟ್ಟಿನಲ್ಲಿ ಯಾವುದೇ ಹಣದ ಆಮಿಷಕ್ಕೆ ಒಳಗಾಗದೆ ಸಾರ್ವಜನಿಕರು, ನೊಂದವರಿಗೆ ಪ್ರಾಮಾಣಿಕತೆಯಿಂದ ಕೆಲಸ ಮಾಡುವಂತೆ ತಿಳಿಸಲಾಯಿತು,_

_ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸಾಮೂಹಿಕವಾಗಿ ಅನುಮತಿ ಪತ್ರ ನೀಡಲಾಗುವುದು ಹಾಗೂ ಉಳಿದ ಸ್ಥಾನಗಳಿಗೆ ಸೂಕ್ತವಾದ ಅಭ್ಯರ್ಥಿಗಳನ್ನು ಶೀಘ್ರದಲ್ಲೇ ಆಯ್ಕೆ ಮಾಡುವುದಾಗಿದೆ ಪೂರ್ವಭಾವಿ ಸಭೆಯಲ್ಲಿ ತಿಳಿಸಲಾಯಿತು,_

_ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಲೋಕೇಶ್.ವಿ, ಜಿಲ್ಲಾ ಗೌರವಾಧ್ಯಕ್ಷರಾದ ಕೆಬಿಸಿ ಮಂಜುನಾಥ್, ಜಿಲ್ಲಾಧ್ಯಕ್ಷರಾದ ಎಸ್.ರವಿ, ತಾಲ್ಲೂಕು ಅಧ್ಯಕ್ಷರಾದ ಯುವರಾಜ್ (ಮನು), ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಸಾಯಿಕುಮಾರ್ ಎನ್.ಕೆ. ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು,_

What's Your Reaction?

like

dislike

love

funny

angry

sad

wow