ಕೆ ಆರ್ ಪೇಟೆ ತಾಲೂಕು ಭೂಕನಕೆರೆ ಮನೆ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಕೆ ಆರ್ ಪೇಟೆ ತಾಲೂಕು ಭೂಕನಕೆರೆ ಮನೆ ದೇವರ   ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ತಾಲ್ಲೂಕಿನ ಬೂಕನಕೆರೆ ಹೋಬಳಿಯ ಗವಿಮಠದಲ್ಲಿರುವ ಪವಾಡ ಪುರುಷ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ದೇವಾಲಯಕ್ಕೆ ಶಾಸಕ ಹೆಚ್.ಟಿ ಮಂಜು ಜೊತೆಯಲ್ಲಿ ಭೇಟಿ ನೀಡಿ. ಗವಿಮಠದ ಪೀಠಾಧ್ಯಕ್ಷ ಶ್ರೀ ಚನ್ನವೀರ ಮಹಾಸ್ವಾಮಿ ದಿವ್ಯ ಸಾನಿಧ್ಯದಲ್ಲಿ ತಮ್ಮ ಮನೆ ದೇವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿಶೇಷ ಪೂಜೆ ಸಲ್ಲಿಸಿದರು.

*ಸ್ವಚ್ಛತೆಗೆ ಸೂಚನೆ* ದೇವಾಲಯದ ಮುಂದೆ ಹರಿಯುತ್ತಿರುವ ಹಳ್ಳದಲ್ಲಿ ಗಿಡ ಗೆಡ್ಡೆಗಳ ತುಂಬಿಕೊಂಡಿರುವ ವ್ಯವಸ್ಥೆಯ ನೋಡಿ ಬೇಸರಗೊಂಡ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಕ್ಷೇತ್ರ ಪವಾಡ ಪುರುಷರ ನೆಲೆಬೀಡು ಸದಾ ಸ್ವಚ್ಛತೆಯಿಂದ ಕಂಗೊಳಿಸಬೇಕು ಎಂದು ಅಭಿಪ್ರಾಯಪಟ್ಟು ಕೂಡಲೇ ಹಳ್ಳವನ್ನು ಶೀಘ್ರವೇ ಸ್ವಚ್ಛಗೊಳಿಸುವಂತೆ ವ್ಯಾಪ್ತಿಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿ ಎಂದು ಸ್ಥಳೀಯ ಮುಖಂಡರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಶಾಸಕ ಹೆಚ್.ಟಿ ಮಂಜು, ಕೆ. ಎಂ ಎಫ್ ಮಾಜಿ ನಿರ್ದೇಶಕ ಅಶೋಕ್,ತಾ. ಪಂ ಮಾಜಿ ಸದಸ್ಯ ಬೂಕನಕೆರೆ ಹುಲ್ಲೆಗೌಡ,ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್,ಹಿರಿಯ ಮುಖಂಡ ತೋಟಪ್ಪಶೆಟ್ಟಿ, ಮೆಳ್ಳಹಳ್ಳಿ ರವಿ ಕುಮಾರ್,ಕರೋಟಿ ಸುಬ್ರಮಣ್ಯ, ಪುರೋಹಿತ ಹೇಮಂತ್ ಕುಮಾರ್, ಇತರರಿದ್ದರು

.

What's Your Reaction?

like

dislike

love

funny

angry

sad

wow