ಇಬ್ಬರ ಯುವಕರ ಗಲಾಟೆ ಕೊಲೆಯಲ್ಲಿ ಅಂತ್ಯ.

ಇಬ್ಬರ ಯುವಕರ ಗಲಾಟೆ ಕೊಲೆಯಲ್ಲಿ ಅಂತ್ಯ.

ಕುಡಿದ ಅಮಲಿನಲ್ಲಿ ಇಬ್ಬರು ಯುವಕರ ನಡುವೆ ಉಂಟಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಬುಯ್ಯನದೊಡ್ಡಿ ಗ್ರಾಮದಲ್ಲಿ ಜರುಗಿದೆ

ಕಂಚನಹಳ್ಳಿ ಗ್ರಾಮದ ವಾಸಿ 24 ವರ್ಷದ ಚಂದನ್ ಎಂಬತಾನೆ ಕೊಲೆಯಾದ ಯುವಕನಾಗಿದ್ದು ಗುರುವಾರ ಸಂಜೆ ಬುಯ್ಯನದೊಡ್ಡಿ ಗ್ರಾಮದ ಬಳಿ ಇರುವ ಬಾರ್ ನಲ್ಲಿ ಚಂದನ್ ಹಾಗೂ ಬೆಳತ್ತೂರು ಗ್ರಾಮದ ನಾಗರಾಜ್ ಪ್ರತ್ಯೇಕ ಟೇಬಲ್ ನಲ್ಲಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಆರಂಭವಾಯಿತು ಎನ್ನಲಾಗಿದೆ.

ಕೂಡಲೇ ಬಾರ್ ಸಿಬ್ಬಂದಿ ಇಬ್ಬರನ್ನು ಬಾರ್ ನಿಂದ ಹೊರದಬಿದ್ದು ಹೊರ ಬಂದ ಚಂದನ್ ತಮ್ಮ ಮನೆಗೆ ತೆರಳಲು ಬೈಕ್ ಹತ್ತುತ್ತಿದ್ದ ವೇಳೆ ಆತನ ತಲೆಗೆ ದೊಣ್ಣೆಯಿಂದ ಹೊಡೆದ ಆರೋಪಿ ನಾಗರಾಜ್ ಕೆಳಗೆ ಬಿದ್ದ ಚಂದನ್ ತಲೆ ಮೇಲೆ ಭಾರೀ ಗಾತ್ರದ ಕಲ್ಲನ್ನು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ ಎನ್ನಲಾಗಿದೆ.

ನಂತರ ಆರೋಪಿ ಸ್ವಂತ ನಾಗರಾಜ್ ಹಲಗೂರು ಪೊಲೀಸ್ ಠಾಣೆಗೆ ಹಾಜರಾಗಿ ಶರಣಗಿದ್ದಾನೆ ಎಂದು ಗೊತ್ತಾಗಿದೆ.

ಸ್ಥಳಕ್ಕೆ ಡಿ ವೈ ಎಸ್ ಪಿ ಕೃಷ್ಣಪ್ಪ, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್, ಪಿಎಸ್ಐ ಮಹೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಹಲಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮಳವಳ್ಳಿ ಸುದ್ದಿ

ವರದಿಗಾರರು:-ಪ್ರತಾಪ್. ಎ. ಬಿ 

What's Your Reaction?

like

dislike

love

funny

angry

sad

wow