*ಕೆ ಆರ್ ಪೇಟೆ ಶಾಸಕರಾದ ಎಚ್ ಟಿ ಮಂಜು ರವರು ಇಂದು ವಾಲ್ಮೀಕಿ ಸಮುದಾಯ ಭವನ ವೀಕ್ಷಣೆ*

*ಕೆ ಆರ್ ಪೇಟೆ ಶಾಸಕರಾದ ಎಚ್ ಟಿ ಮಂಜು ರವರು ಇಂದು ವಾಲ್ಮೀಕಿ ಸಮುದಾಯ ಭವನ ವೀಕ್ಷಣೆ*

 ಕೆ ಆರ್ ಪೇಟೆ ವಾಲ್ಮೀಕಿ ಸಮುದಾಯ ಭವನ ಸಮುದಾಯ ಭವನದ ಕೆಲಸ ಮಂದಗತಿಯಲ್ಲಿ ನಡೆಯಲು ಕಾರಣವೇನು ಎಂದು ಅಧಿಕಾರಿಗಳಿಗೆ ತಾರಾಟಿ ತೆಗೆದುಕೊಂಡು. ಸಮಾಜದ ಮುಖಂಡರುಗಳು ಮೇಲಿಂದ ಮೇಲೆ ಒತ್ತಡ ಏರುತ್ತಿದ್ದು ತದಾಕ್ಣದಲ್ಲಿ ಉಳಿಕೆ ಕೆಲಸದ ಕಾಮಗಾರಿಯನ್ನು ಪೂರ್ಣಗೊಳಿಸಿ ಇನ್ನು ಉಳಿಕೆ ಕೆಲಸಕ್ಕೆ ಬೇಕಾಗುವ ಅನುದಾನವನ್ನು ಇದಕ್ಕೆ ಸಂಬಂಧಪಟ್ಟ ಸಚಿವರಲ್ಲಿ ಮನವಿ ಮಾಡಿ ಅನುದಾನ ತರಲು ಸಮಾಜದ ಮುಖಂಡರು ಒಟ್ಟುಗೂಡಿ ಸಂಬಂಧಪಟ್ಟ ಅಧಿಕಾರಿಗಳ ಹತ್ತಿರ ಒತ್ತಡ ತರುವುದಾಗಿ ತಿಳಿಸಿದರು.

 ಮತ್ತು ಇದೇ ರೀತಿ ನಮ್ಮ ಕ್ಷೇತ್ರದಲ್ಲಿ ಎಷ್ಟು ಸಮುದಾಯ ಭವನಗಳು ಪೂರ್ಣ ಕಾಮಗಾರಿ ಮುಗಿಯದೆ ಇರುವ ಸಮುದಾಯ ಭವನಗಳ ಹೆಸರು ಪಟ್ಟಿ ಮಾಡಿ ನಮ್ಮ ಗಮನಕ್ಕೆ ತನ್ನಿ ಎಂದು ಸಮಾಜ ಕಲ್ಯಾಣ ಅಧಿಕಾರಿ ದಿವಾಕರ್ ರವರಿಗೆ ಮಾನ್ಯ ಶಾಸಕರಾದ ಎಚ್ ಟಿ ಮಂಜು ರವರು ತಿಳಿಸಿದರು.

 ಈ ಸಂದರ್ಭದಲ್ಲಿಸಮಾಜ ಕಲ್ಯಾಣ ಅಧಿಕಾರಿಗಳಾದ ದಿವಾಕರ್. ಸಿಬ್ಬಂದಿಗಳಾದ ಪರಮೇಶ್. ಉಮೇಶ್. ಅಭಿ. ಹಾಗೂ ಸಮಾಜದ ಮುಖಂಡರುಗಳಾದ ಕಾರಿಗನಹಳ್ಳಿ ಕುಮಾರ್. ಎಆರ್ ರಾಜ ನಾಯಕ. ರಾಜು ಜಿ ಪಿ.ಕಡ್ಲೆಕಾಯಿ ಕೃಷ್ಣಣ್ಣ. ರಾಜ್ ನಾಯಕ. ಮಹೇಶ್ ನಾಯಕ.ಬೊಂಬರಾಯ್ ನಾಯಕ. ಮಹದೇವ್. ವೆಂಕಟೇಶ್. ಕುಪ್ಪಳ್ಳಿ ಶೇಖರ್. ರವಿ. ಶಾಸಕರ ಆಪ್ತ ಸಹಾಯಕರಾದ ಪ್ರತಾಪ್ ಮತಿತರು ಉಪಸ್ಥಿತರಿದ್ದರು.

 *ವರದಿ,ರಾಜು ಜಿಪಿ ಕಿಕ್ಕೇರಿ*

What's Your Reaction?

like

dislike

love

funny

angry

sad

wow